ಬುಧವಾರ, ಜನವರಿ 17, 2018

mAnavaru kRuta yugadali - ugAbhOga - purandaradAsaru

ಮಾನವರು ಕೃತಯುಗದಲಿ - ಉಗಾಭೋಗ - ಪುರಂದರದಾಸರು

ಈ ಉಗಾಭೋಗವನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ.


।। ಮಾನವರು ಕೃತಯುಗದಲಿ ಜಪವ ಮಾಡಲಿಬೇಕು 
ಜ್ಞಾನಸಾಧನವಿರಲಿ ಬೇಕು ತ್ರೇತಾಯುಗದಲಿ  ।
ಏನೆಂಬೆ ದ್ವಾಪರದಲಿ ಯಜ್ಞವೇ ಸಾಧನವು 
ಗಾನದಾನಗಳು ಕಲಿಯುಗದಲಿ ಪುರಂದರವಿಠ್ಠಲ ।।

ಸರಳ ಕನ್ನಡದಲ್ಲಿ ಉಗಾಭೋಗದ ಅರ್ಥ:

ಹರಿಯ ಕೃಪೆಗೆ, ಮುಕ್ತಿ ಪಡೆಯುದಕ್ಕೆ ಪ್ರತಿಯೊಂದು ಯುಗದಲ್ಲಿಯೂ ಒಂದೊಂದು ವಿಶೇಷ ಸಾಧನ. ಕೃತಯುಗದಲ್ಲಿ ಜಪ, ತ್ರೇತಾಯುಗದಲ್ಲಿ ಜ್ಞಾನ, ದ್ವಾಪರದಲ್ಲಿ ಯಜ್ಞವಾದರೆ, ಕಲಿಯುಗದಲ್ಲಿ ಕೇವಲ ಹರಿನಾಮ ಸಂಕೀರ್ತನೆ, ಸತ್ಪಾತ್ರರಿಗೆ ದಾನ ಇವುಗಳಿಂದ ಮುಕ್ತಿಯು ಸಾಧ್ಯ ಎಂದು ಪುರಂದರದಾಸರು ಸಾರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ