ಮಾನವರು ಕೃತಯುಗದಲಿ - ಉಗಾಭೋಗ - ಪುರಂದರದಾಸರು
ಈ ಉಗಾಭೋಗವನ್ನು ಧನ್ಯಾಸಿ ರಾಗದಲ್ಲಿ ಇಲ್ಲಿ ಕೇಳಿ.
।। ಮಾನವರು ಕೃತಯುಗದಲಿ ಜಪವ ಮಾಡಲಿಬೇಕು
ಜ್ಞಾನಸಾಧನವಿರಲಿ ಬೇಕು ತ್ರೇತಾಯುಗದಲಿ ।
ಏನೆಂಬೆ ದ್ವಾಪರದಲಿ ಯಜ್ಞವೇ ಸಾಧನವು
ಗಾನದಾನಗಳು ಕಲಿಯುಗದಲಿ ಪುರಂದರವಿಠ್ಠಲ ।।
ಸರಳ ಕನ್ನಡದಲ್ಲಿ ಉಗಾಭೋಗದ ಅರ್ಥ:
ಹರಿಯ ಕೃಪೆಗೆ, ಮುಕ್ತಿ ಪಡೆಯುದಕ್ಕೆ ಪ್ರತಿಯೊಂದು ಯುಗದಲ್ಲಿಯೂ ಒಂದೊಂದು ವಿಶೇಷ ಸಾಧನ. ಕೃತಯುಗದಲ್ಲಿ ಜಪ, ತ್ರೇತಾಯುಗದಲ್ಲಿ ಜ್ಞಾನ, ದ್ವಾಪರದಲ್ಲಿ ಯಜ್ಞವಾದರೆ, ಕಲಿಯುಗದಲ್ಲಿ ಕೇವಲ ಹರಿನಾಮ ಸಂಕೀರ್ತನೆ, ಸತ್ಪಾತ್ರರಿಗೆ ದಾನ ಇವುಗಳಿಂದ ಮುಕ್ತಿಯು ಸಾಧ್ಯ ಎಂದು ಪುರಂದರದಾಸರು ಸಾರಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ